July 21, 2017: ಕಥೊಲಿಕ್ ಸಭಾ ಮಡ್ಯಂತ್ಯಾರು ಘಟಕದ ವತಿಯಿಂದ “ತೆಲಿಕದ ಬೊಳ್ಳಿ” ದೇವ್‍ದಾಸ್ ಕಾಪಿಕಾಡ್‍ರವರ ಕೊಡೆ ಬುಡ್ಪಾರ್ ನಾಟಕವನ್ನು ಸೇಕ್ರೆಡ್ ಹಾರ್ಟ್ ಚರ್ಚ್‍ನ ಸಭಾಭವನದಲ್ಲಿ ಪ್ರದರ್ಶಿಸಲಾಯಿತು.

ಈ ಸಂದರ್ಭದಲ್ಲಿ ಚರ್ಚ್ ಗುರುಗಳಾದ ವಂದನೀಯ ಬಾಸಿಲ್ ವಾಸ್‍ರವರು, ಸಹಾಯಕ ಧರ್ಮಗುರುಗಳಾದ ವಂದನೀಯ ಆಲ್ವಿನ್ ಡಿಸೋಜಾರವರು, ಪ್ರಾಂಶುಪಲರಾದ ವಂದನೀಯ ಧರ್ಮಗುರುಗಳಾದ ಜೆರೊಂ ಡಿಸೋಜರವರು 7 ಜನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಿ ಹೂ ಗುಚ್ಚೆ ಮತ್ತು ಸಹಾಯಧನ ನೀಡಿ ಸನ್ಮಾನಿಸಲಾಯಿತು.

 

ವೇದಿಕೆಯಲ್ಲಿ ಪ್ರಾಂತೀಯ ಅಧ್ಯಕ್ಷರಾದ ಅನಿಲ್ ಲೋಬೊರವರು ಉಪಾಧ್ಯಕ್ಷರಾದ ವಾಲ್ಟರ್ ಮೊನಿಸ್, ಚರ್ಚ್ ಪಾಲನೆಮಂಡಳಿಯ ಉಪಧ್ಯಕ್ಷರು ಲಿಯೊ ರೊಡ್ರಿಗಸ್, ಘಟಕದ ಅಧ್ಯಕ್ಷರಾದ ಐವನ್ ಸಿಕ್ವೇರಾರವರು ಉಪಸ್ಥಿತರಿದ್ದರು.

ಕಥೊಲಿಕ್ ಸಭಾ ಮಡ್ಯಂತ್ಯಾರು ಘಟಕದ ಸರ್ವಸದಸ್ಯರು ಈ ಕಾರ್ಯಕ್ರಮವನ್ನು ನಿಯೋಜಿಸಿದ್ದರು.

ಸಹಕಾರ್ಯದರ್ಶಿ ಜೆರಾಲ್ಡ್ ಮೋರಸ್ ಹಾಗೂ ವಿನ್ಸೆಂಟ್ ಮೋರಸ್‍ರವರು ಕಾರ್ಯಕ್ರಮ ನಿರೂಪಣೆ ಮಾಡಿದರು.